ಮಹಾಲಿಂಗಪುರ ತಾಲೂಕ ರಚನೆಗೆ ಆಗ್ರಹ

ಮಹಾಲಿಂಗಪುರ ತಾಲೂಕ ರಚನೆಗೆ ಆಗ್ರಹ

ಮಹಾಲಿಂಗಪುರ ತಾಲೂಕ ರಚನೆಗೆ ಆಗ್ರಹ

ಬಾಗಲಕೋಟೆ

ಮಹಾಲಿಂಗಪುರ ತಾಲೂಕು ರಚಿಸಲು  ಒತ್ತಾಯಿಸಿ ಕಳೆದ ೧೨೪೦ ದಿನಗಳಿಂದ ಹೋರಾಟ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವರಿಕೆ ಮಾಡಿಸಿ ನಮ್ಮ ತಾಲೂಕ ಘೋಷಣೆಯಾಗಬೇಕೆಂದು ರವಿವಾರ ಹೋರಾಟಗಾರರ ಕಾನೂನ ಮತ್ತು ಸಂಸದೀಯ ಸವಿವ ಎಚ್.ಕೆ.ಪಾಟೀಲ, ಅಬಕಾರಿ,ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೆ ಮನವಿ ಸಲ್ಲಿಸಿದರು‌
ವೆ‌ಂಕಟೇಶ ಆಸ್ಪತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರು ಪಟ್ಟಣದ ಜಿಎಲ್ ಬಿಸಿ ಅತಿಥಿ ಗ್ರಹದಲ್ಲಿ ಹೋರಾಟಗಾರರ ಮನವಿ ಸ್ವೀಕರಿಸಿದರು..
ತಾಲೂಕ ಹೋರಾಟ ಸಮೀತಿ ಗಂಗಾಧರ ಮೇಟಿ ಮಾತನಾಡಿ ನಮ್ಮ ತಾಲೂಕಿನ‌ ಬೇಡಿಕೆಯು ೩೦ ವರ್ಷಗಳ ಬೇಡಿಕೆ ಇತ್ತಿಚಿಗೆ ಸದನದಲ್ಲಿ ಕಂದಾಯ ಸಚಿವ ಕೃಷ್ಣಬೈರೆಗೌಡ ಅವತು ಮಹಾಲಿಂಗಪುರ ತಾಲೂಕ ರಚನೆ ವರದಿಯನ್ನು ಪರಿಶಿಲಿಸದೇ ವಿಕೇಖಕ್ಕೆ  ಹಾಕಿರುವದು ಹೋರಾಟಗಾರರಿಗೆ ನೋವುಂಟು ಮಾಡಿದೆ.. ನಮ್ಮ ವರದಿಯನ್ನು ಮರು ಪರಿಶೀಲಸಿ ಸಿಎಂ‌ ಅವರ ಭೇಟಿಗೆ ದಿನಾಂ‌ಕ ನಿಗದಿ ಪಡಿಸಲು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ ರಬಕವಿ-ಬನಹಟ್ಟಿ, ತೇರದಾಳ ತಾಲೂಕುಗಳಿಗಿಂತ ಮೊದಲೇ ಮಹಾಲಿಂಗಪುರ ತಾಲೂಕ ರಚನೆಯಾಗಬೇಕಾಗಿತ್ತು ರಾಜಕಾರಣ ಆಡಳಿತಾತ್ಮಕ ಸಮಸ್ಯೆಯಿಂದ ವಿಳಂಬವಾಗಿದೆ ತಾಲೂಕ ಆಗುವ ಎಲ್ಲಾ ಅರ್ಹತೆಯನ್ನು ಹೊಂದಿರುವ ಮಹಾಲಿಂಗಪುರ ತಾಲೂಕ ರಚನೆ ಸಿಎಂ‌ಜೊತೆ ಚರ್ಚಿಸಲು ದಿನಾಂಕ‌‌ ನಿಗದಿಪಡಿಸುವ ಭರವಸೆ ನೀಡಿದರು.
ಕಾನೂನ ಸಚಿವ ಎಚ್.ಕೆ.ಪಾಟೀಲ ಮನವಿ ಸ್ವೀಕರಿಸಿ‌ ಮಾತನಾಡಿದ ಅವರು ಮಾಹಿತಿ‌ ಕೊರತೆ ವಿಲೇಖಕ್ಕೆ ಹಾಕಿದ ಲೋಪದೋಷಗಳನ್ನು ಸರಿಪಡಿಸಿ ಕೊಂಡು ತಿಮ್ಮಾಪೂರ ಅವರ ಜೊತೆ ಸಿಎಂ ಮತ್ತು ಕಂದಾಯ ಸಚಿವರ ಮನವರಿಕೆ ಮಾಡಿಸಿ ಮಹಾಲಿಂಗಪೂರ ತಾಲೂಕ ರಚನೆಗೆ ನಮ್ಮ‌ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದರು. ಕಾಂಗ್ರೇಸ್ ಮುಖಂಡ ಸಿದ್ದು ಕೊಣ್ಣೂರ, ಅನಂದ ಹಟ್ಟಿ ಮತ್ತಿತರರು ನೇತೃತ್ವ ವಹಿಸಿದ್ದರು.